ನಟ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಹಾಡು ಆಗಸ್ಟ್‌ 15ಕ್ಕೆ ರಿಲೀಸ್‌ ಮಾಡಲು ಚಿತ್ರತಂಡ ತಯಾರಾಗಿತ್ತು. ಆದರೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಾಸನ ಬೇಲ್‌ ಸುಪ್ರೀಂ ಕೋರ್ಟ್‌ ರದ್ದು ಮಾಡಿರುವುದರಿಂದ ಸಾಂಗ್‌ ರಿಲೀಸನ್ನು ಮುಂದೂಡಲಾಯಿತು.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಶೂಟಿಂಗ್‌ನ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರದ ಮೊದಲ ಹಾಡನ್ನು ಬಿಡುಗಡೆಮಾಡಲು ಚಿತ್ರತಂಡವು ಸಜ್ಜಾಗಿತ್ತು.ಹಾಗೆಯೇ “ಇದ್ರೆ ನೆಮ್ದಿಯಾಗ್‌ ಇರ್ಬೇಕು”ಎನ್ನುವ ಡೈಲಾಗ್‌ ಈಗಾಗಲೇ ವೈರಲ್‌ ಆಗಿದೆ. ಡೆವಿಲ್‌ ಚಿತ್ರದ ಮೊದಲನೇ ಹಾಡನ್ನು ಆಗಸ್ಟ್‌ 24ರಂದು ಬಿಡುಗಡೆಯಾಗಲಿದೆ.

ಡೆವಿಲ್‌ ಚಿತ್ರವು ಮಿಲನಾ ಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬರಲಿದೆ. ಮುಂದಿನ ತಿಂಗಳಿನಲ್ಲಿ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಇದು ದರ್ಶನ್‌ ನಟನೆಯ 57ನೇ ಸಿನಿಮಾ ಆಗಿದ್ದು ಈ ಸಿನಿಮಾದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *