ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆರ್‌. ಎಸ್‌. ಎಸ್‌ .ಸಂಘವನ್ನು  ನಿಷೇಧ ಮಾಡುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪ್ರಿಯಾಂಕ್‌ ಖರ್ಗೆ ಮನವಿಯನ್ನು ಮಾಡಿದ್ದಾರೆ.

ಆರ್‌ ಎಸ್‌ ಎಸ್‌ ಸಂಘ ನಿಷೇಧ ಮಾಡಲು ಸಿಎಂಗೆ ಪತ್ರ ಬರೆದಿರುವ ಪರಿಣಾಮ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ 2 ತಿಂಗಳಿನಿಂದ ನನ್ನ ಪೋನ್‌ ರಿಂಗಾಗುವುದು ನಿಂತಿಲ್ಲ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಆರ್‌ ಎಸ್‌ ಎಸ್‌ ಚಟುವಟಿಕೆಗಳು ನಡೆಯದಂತೆ ಪ್ರಶ್ನೆ ಮಾಡಿದ್ದಕ್ಕಾಗಿ ನನಗೆ ಬೆದರಿಕೆ ಕರೆಗಳು ಬರುತ್ತಿದ್ದು, ನನ್ನ ಮತ್ತು ನನ್ನ ಕುಟುಂಬದವರಿಗೆ ನಿಂದನೆಯ ಕರೆಗಳು ಬರುತ್ತಿವೆ ನಾನು ಯಾವುದಕ್ಕೂ ಭಯ ಬೀಳುವುದಿಲ್ಲ ಎಂದು ಹೇಳಿದ್ದಾರೆ.

ನನಗೆ ಈ ರೀತಿಯಾಗಿರುವುದಕ್ಕೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಏಕೆಂದರೆ ಆರ್‌ ಎಸ್‌ ಎಸ್‌ ಸಂಘವೂ ಡಾ.ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿಯವರನ್ನೇ ಬಿಟ್ಟಿಲ್ಲ. ಇನ್ನೂ ನನ್ನನ್ನು ಬಿಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.ನಮ್ಮ ದೇಶವನ್ನು ಅಪಾಯಕಾರಿ ವೈರಸ್ಸುಗಳಿಂದ ಮುಕ್ತಿ ಕೊಡಿಸಿ, ಸಮಾನತೆಯ ಸಮಾಜವನ್ನು ಕಟ್ಟಬೇಕಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *