ಬೆಂಗಳೂರು: ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ನೀಡಿಲ್ಲ ಎಂದು ಮಹಿಳೆಯರು ಸಾಮಾಜಿಕ ಜಾಲಾತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 2 ತಿಂಗಳ ಗೃಹಲಕ್ಷ್ಮೀ ಹಣ ಎಲ್ಲಿ ಹೋಯ್ತು. ಪ್ರಶ್ನೆಗೆ ಉತ್ತರ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಿಎಂ ಕುರ್ಚಿಗಾಗಿ ಕದನ ನಡೆಸುತ್ತಾ ಕೆಲಸದಲ್ಲಿ ನಿರತರಾಗಿ ಮಹಿಳೆಯರಿಗೆ ನೀಡಬೇಕಾದ 1 ಕೋಟಿ 26 ಲಕ್ಷ ಗೃಹಲಕ್ಷ್ಮಿ ಹಣ ಎಲ್ಲಿ ಹೋಯ್ತು? ಫಲಾನುಭವಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರ ಆಡಳಿತದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದ್ವೇಷ ಭಾಷಣ ಮಾಡಲು ವಿರೋಧ ಪಕ್ಷದವರಿಗೆ , ಮಾಧ್ಯಮದವರಿಗೆ, ಅವಕಾಶ ಕೊಡದೆ ಸಂವಿಧಾನ ನಮಗೆ ನೀಡಿರುವ ವಾಕ್‌ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಉಪಾಯವಾಗಿದೆ.ರಾಜ್ಯಪಾಲರು ಡಿ.29ಕ್ಕೆ ಬೆಂಗಳೂರಿಗೆ ಬಂದಾಗ ವಿದೇಯಕ್ಕೆ ತಡೆಯನ್ನು ನೀಡುವಂತೆ ಮನವಿಯನ್ನು ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *