ತುಳುನಾಡಿನ ದೈವವನ್ನು ಹೆಣ್ಣು ದೆವ್ವವೆಂದು ಹೇಳಿಕೆಯನ್ನು ನೀಡಿರುವ ರಣವೀರ್ ಸಿಂಗ್ ವಿರುದ್ದ ಆಕ್ರೋಶ ವ್ಯಕ್ತವಾಗಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿಯಲಾಗಿತ್ತು.ಅಂತೆಯೇ ರಣವೀರ್ ಕ್ಷಮೆಯನ್ನೂ ಕೇಳಿದ್ದಾರೆ.
ಕರಾವಳಿ ದೈವಗಳ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡಿ ಅದನ್ನು ಅನುಕರಣೆ ಮಾಡಿ ತೋರಿಸಿದ್ದಕ್ಕಾಗಿ ಅವರ ವಿರುದ್ದ ಬೆಂಗಳೂರಿಲ್ಲಿ ನಟ ರಣವೀರ್ ಸಿಂಗ್ ವಿರುದ್ದ ದೂರು ದಾಖಲಾಗಿದೆ.
ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ನಟ ರಣವೀರ್ ಸಿಂಗ್ ದೈವವನ್ನು ಅಪಮಾನ ಮಾಡಿದ್ದಲ್ಲದೆ ಅನುಕರಣೆ ಕೂಡಾ ಮಾಡಿದ್ದರು. ಆದ್ದರಿಂದ ಈ 2 ದಿನಗಳ ಹಿಂದೆ ಹಿಂದು ಜನಜಾಗೃತಿ ಸಮಿತಿಯು ನಟನ ವಬಿರುದ್ದ ಗೋವಾದ ಪಣಜಿಯಲ್ಲಿ ದೂರನ್ನು ದಾಖಲಿಸಿದ್ದರು. ನಟ ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಯನ್ನು ಕ್ಷಮೆಯಾಚಿಸಬೇಕೆಂದು ತುಳುನಾಡಿನ ದೈವಾರಾಧಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುವ ಕಾರಣ ಇದೀಗ ನಟನ ವಿರುದ್ದ ವಕೀಲರಾದ ಪ್ರಶಾಂತ್ ಮೇತಲ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುವುದಲ್ಲದೆ, ಎಫ್ಐಆರ್ ದಾಖಲು ಮಾಡಲು ಆಗ್ರಹ ಮಾಡಿದ್ದಾರೆ.ನಟ ಎಲ್ಲೋ ಕ್ಷಮೆಯನ್ನು ಕೇಳೀರಬಹುದು ಆದ್ರೆ ಅದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
