ಬೆಂಗಳೂರು: ನನ್ನ ವಿರುದ್ದವಾಘಿ 17 ಕೇಸುಗಳಿವೆ. ಇನ್ನೂ ಯಾವುದಾದರೂ ಕೇಸ್ ಇದ್ದರೆ ಹಾಕಿ , ಆದರೆ ನನ್ನ ದಾರಿ ತಪ್ಪಿಸಬೇಡಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ದ್ವೇಷ ಭಾಷಣದ ಕಾಯ್ದೆ ವಿಚಾರದ ನಮ್ಮ ಸಿದ್ದರಾಮಯ್ಯ ಎಂಬ ಹೆಸರಿನ ಫೇಸ್ ಬುಕ್ ಪೋಸ್ಟ್ವೊಂದಕ್ಕೆ ಪ್ರತಾಪ್ ಸಿಂಹ ತಿರಗೇಟನ್ನು ನೀಡಿದ್ದಾರೆ.
“ 2-3 ವರ್ಷದ ಹಳೆಯ ಹೇಳಿಕೆಯನ್ನು ಕಟ್ ಆಂಡ್ ಪೇಸ್ಟ್ ಮಾಡಿ, ದ್ವೇಷ ಭಾಷಣದ ಕಾಯಿದೆಗೆ ಪ್ರತಾಪ್ ಸೀಮಹ ಹೆದರಿ ಅಪಪ್ರಚಾರ ಮಾಡುತಿದ್ದಾರೆ ಮಹಾನುಭಾವರೇ ಕೇರಳ ಸಿಎಂ ಟ್ವೀಟ್ ಮತ್ತು ಜನರಲ್ ಸೆಕ್ರೆಟರಿಗೆ ಹೆದರಿ ಅಕ್ರಮ ವಲಸಿಗರಿಗೆ ವಸತಿ ನೀಡಲು ಹೊರಟಿರೋ ಪುಕ್ಕಲ ಸಿಎಂ ಗೆ ಹೆದರುವವನು ನಾನಲ್ಲ. ನನ್ನ ವಿರುದ್ದವಾಗಿ 17 ಕೇಸುಗಳಿವೆ ಇನ್ನೂ ಯಾವುದಾದ್ರೂ ಇದ್ರೆ ಹಾಕಿ, ಆದ್ರೆ ನನ್ನ ದಾರಿ ತಪ್ಪಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.

