ಮಂಡ್ಯ: ಕನ್ನಡದಲ್ಲಿ ತಿಥಿ ಸಿನಿಮಾ ಮಾಡಿ ಗಡ್ಡಪ್ಪ ಎಂದೇ  ಫೇಮಸ್‌ ಆಗಿರುವ  ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಇದೀಗ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.

ತಿಥಿ, ಜಾನಿ ಮೇರಾ ನಾಮ್‌, ಹಳ್ಳಿ ಪಂಚಾಯಿತಿ, ತರಲೇ ವಿಲೇಜ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಸ್ತಮಾ ಮತ್ತು ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದ ಗಡ್ಡಪ್ಪ , ಬಿದ್ದು ಸೊಂಟಕ್ಕೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಯನ್ನು ಕೂಡಾ ತೆಗೆದುಕೊಂಡಿದ್ರು.

ಗಡ್ಡಪ್ಪ ಕುಟುಂಬದವರು ತಮ್ಮ ತಂದೆಯ ಸಾವಿನ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದ್ದು, ತಮ್ಮಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *