ಬೆಂಗಳೂರು: ನಾನೇ 5 ವರ್ಷಗಳ ಕಾಲ ಸಿಎಂ ಪಟ್ಟವನ್ನು ಅಲಂಕರಿಸಿರುತ್ತೆನೆ ಎಂದು ಸಾರಿ ಸಾರಿ ಹೇಳುತಿದ್ದ ಸಿಎಂ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಹೈಕಮಾಂಡ್ ನಿರ್ಧಾರದಂತೆ ನಮ್ಮ ನಡೆ, ಅವರ ತೀರ್ಮಾನವೇ ಅಂತಿಮ ಎಂಬ ಹೇಳಿಕೆಯನ್ನು ನೀಡಿ ಎಲ್ಲರಲ್ಲೂ ಕೂತೂಹಲವನ್ನು ಮೂಡಿಸಿದ್ದಾರೆ.
ನೆನ್ನೆ ಅಂದರೆ ಸೋಮವಾರ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈ ಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತೇವೆ. ಅವರ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.
