ನವದೆಹಲಿ: ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣದ ಕುರಿತು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನುಹಂಚಿಕೊಂಡಿದ್ದು, ಬಿಜೆಪಿ ಪಕ್ಷದ ಗ್ರಹಚಾರ ಬಿಡಿಸಿದ್ದಾರೆ.ಬಿಜೆಪಿ ಪಕ್ಷ ಗಾಢ ನಿದ್ರೆಯಲ್ಲಿ ಮುಳುಗಿದ್ದು, ಇಂದೋರ್ನಲ್ಲಿ ನೀರು ಇರಲಿಲ್ಲ ಎಂದು ವಿಷವನ್ನು ಹಂಚಿದ್ದಾರೆ ಎಂದು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
14 ಜನರನ್ನು ಕಳೆದುಕೊಂಡ ಮನೆಗಳು ಶೋಕ ಆಚರಿಸುತ್ತೀವೆ. ಬಡಜನರು ಪಾಪ ಅಸಹಾಯಕರಾಗಿದ್ದಾರೆ, ಆದರೆ ಬಿಜೆಪಿಯವರು ಸಾಂತ್ವನ ಹೇಳುವುದನ್ನು ಬಿಟ್ಟು ದುರಂಕಾರದ ಮಾತುಗಳನ್ನು ಆಡಿ, ಧಿಮಾಕಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
