ಬೆಳಗಾವಿ: ಯಡಿಯೂರಪ್ಪನ ಹೆಸರನ್ನು ಹಾಳು ಮಾಡಿದ್ದು, ವಿಜಯೇಂದ್ರ.ಅವರ ಎಲ್ಲಾ ದಂದೆಗಳನ್ನು ಬಿಚ್ಚಿಡಬೇಕಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ʼರಾಜ್ಯ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ತನ್ನ ಪಕ್ಷದ ಹೈಕಮಾಂಡ್ನ್ನು ಕಾಂಗ್ರಸ್ ತೃಪ್ತಿಪಡಿಸುತ್ತಿದೆ.ʼಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲೆಕ್ಷನ್ ಕಿಂಗ್ ಎಂದರೆ ವಿಜಯೇಂದ್ರೆಂದರೆ ತಪ್ಪಾಗಲಾರದು.ಅವರ ಕಲೆಕ್ಷನ್ ದಂದೆಯನ್ನೇಲ್ಲಾ ಬಹಿರಂಗಪಡಿಸಬೇಕಾ? ಅವರಪ್ಪನ ಹೆಚರನ್ನು ಹಾಳು ಮಾಡಿರುವುದು ಬೇರೆ ಯಾರೂ ಅಲ್ಲ ಅವರ ಮಗನೇ. ವಿಜಯೇಂದ್ರನಿಗೆ ಅನುಭವವಿಲ್ಲ.ಯಾವ ಖಜಾನೆ ಖಾಲಿಯಾಗಿದೆ ಎಂದು ಸದನದಲ್ಲಿ ಮಾತನಾಡಲಿ ಮತ್ತು ಪ್ರಶ್ನೆ ಮಾಡಲಿ ಎಂದು ಸವಾಲನ್ನು ಹಾಕಿದ್ದಾರೆ.
