ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ನಿವಾಸದ ಬಳಿ ಕಾರು ಹೊತ್ತಿ ಉರಿದಿರವ ಘಟನೆ ನಡೆದಿದೆ. ಬೆಂಗಳೂರಿನಲ್ಲಿರುವ ಕಾವೇರಿ ನಿವಾಸದ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ ಕಾರೊಂದು ಇದ್ದಕ್ಕಿದ್ದ ಹಾಗೆ ಹೊತ್ತಿ ಉರಿದಿದೆ ಎನ್ನಲಾಗಿದೆ.

ಸಿಎಂ ಮನೆಯ ಸುತ್ತ ಕಾರು ಹೊತ್ತಿ ಉರಿದಿರುವ ಪರಿಣಾಮ ಹೊಗೆ ಆವರಿಸಿಕೊಂಡಿದೆ. ಆ ಕಾರಣದಿಂದ ಸಿಎಂ ನಿವಾಸದ ಸುತ್ತಲೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸದಾಶಿವನಗರದಿಂದ ಸಿಎಂ ನಿವಾಸದ ನಡುವಿನ ರಸ್ತೆ , ಪ್ಯಾಲೆಸ್ ಗುಟ್ಟಹಳ್ಳಿ ಕಡೆಗೂ ಕೂಡಾ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗಿದೆ.

