ನವದೆಹಲಿ: ನಿಜವಾದ ಬಾರತೀಯ ಎಂದು ನಿರ್ಧಾರ ಮಾಡುವುದು ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ನನ್ನ ಸಹೋದರನಿಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವಿದೆ ಅದರ ವಿರುದ್ದ ಎಂದಿಗೂ ಏನನ್ನು ಮಾತನಾಡುವುದಿಲ್ಲೆಂದು ಹೇಳಿದ್ದಾರೆ.ಲೋಕಸಭೆಯನ್ನು ವಿರೋಧ ಪಕ್ಷದವರಾಗಿ ಪ್ರಶ್ನೆ ಮಾಡುವುದು ರಾಹುಲ್ ಗಾಂಧಿಯವರ ಕರ್ತವ್ಯ ಎಂದಿದ್ದಾರೆ.
ವಿರೋಧ ಪಕ್ಷದವರಾಗಿ ಪ್ರಶ್ನೆ ಮಾಡುವುದು, ಸವಾಲು ಹಾಕುವುದು ವಿರೋಧ ಪಕ್ಷದ ನಾಯಕನ ಕೆಲಸ. “ ನನ್ನ ಸಹೋದರ ಸೇನೆಯ ವಿರುದ್ದವಾಗಿ ಏನು ಹೇಳುವುದಿಲ್ಲ” ಎಂದಿದ್ದಾರೆ.
