ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟಿನಲ್ಲಿ ಟ್ರಯಲ್ ಶುರುವಾಗಿದ್ದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಹಾಗೂ ಇನ್ನಿತರಿಗೆ ಸಂಕಷ್ಟ ಶುರುವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಸಹಚರರು ಜೈಲಿನಲ್ಲಿದ್ದಾರೆ.ದರ್ಶನ್ ಪವಿತ್ರಾಗೌಡ ಒಂದೇ ಜೈಲಿನಲ್ಲಿದ್ದರೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಡಿಜಿಪಿ ಅಲೋಕ್ ಕುಮಾರ್ ಬಳಿ ಕಾನೂನಿನ ಪರ್ಮಿಷನ್ ಪಡೆದುಕೊಂಡು ದರ್ಶನ್ ಭೇಟಿಗೆ ಪವಿತ್ರಾಗೌಡ ಪ್ರಯತ್ನಿಸಿದರೂ ದರ್ಶನ್ ಇಂಟರೆಸ್ಟ್ ತೋರಿಸುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.0

ದರ್ಶನ್ ಮತ್ತು ಪವಿತ್ರಾಗೌಡ ನಡುವೆ ಮನಸ್ತಾಪವಿದೆಯಾ ಎನ್ನುವ ಚರ್ಚೆಗಳು ನಡೆಯುತ್ತಿವೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕೇಸ್ನ ಟ್ರಯಲ್ ಪ್ರಾರಂಭವಾಗಿದೆ ಎನ್ನಲಾಗಿದೆ.
