ಉಡುಪಿ: ಬಿಜೆಪಿ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ದ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಕಾರಣಕ್ಕೆ ಹೋರಾಟಗಾರ ಮಹೇಶ್ ತಿಮರೋಡಿಯನ್ನು ಉಡುಪಿ ಜಿಲ್ಲೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹೇಶ್ ತಿಮರೋಡಿ ಬಂಧನದ ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಯ ಸುತ್ತಾಮುತ್ತಾ ಬಿ ಬಂದೋಬಸ್ತ್ ಮಾಡಲಾಗಿದೆ.ಠಾಣೆಯ ಮುಂದೆ ಜನ ಬಂದು ಜಮಾಯಿಸುವ ಹಾಗಿಲ್ಲ, ಹೋರಾಟ ನಡೆಸುವ ಹಾಗಿಲ್ಲ ಎನ್ನುವ ಆದೇಶವನ್ನು ಹೊರಡಿಸಿದ್ದಾರೆ ಉಡುಪಿ ಎಸ್.ಪಿ ಹರಿರಾಮ್ ಎಂದು ತಿಳಿದುಬಂದಿದೆ.
