ಇತ್ತೀಚೆಗೆ ಪ್ರಾರಂಭವಾಗಿರುವ ಫ್ಯಾನ್ಸ್ವಾರ್ ವಿಚಾರವಾಗಿ ರಕ್ಚಿತಾ ಪ್ರೇಮ್ರವರ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ದರ್ಶನ್ ಮತ್ತು ಸುದೀಪ್ ಜೊತೆ ನಟಿಸಿರುವ ಮತ್ತು ಆಪ್ತ ಗೆಳತಿಯಾಗಿರುವ ರಕ್ಷಿತಾ ಪ್ರೇಮ್ ಸ್ಟಾರ್ ವಾರ್ ಬಗ್ಗೆ ಮಾತನಾಡಿರುವ ಅವರು, ಸುದೀಪ್ ಹುಬ್ಬಳ್ಳಿಯಲ್ಲಿ ನಡೆದ ಇವೆಂಟಿನಲ್ಲಿ ಕನ್ನಡ ಚಿತ್ರಗಳಿಗೆ ಕಾಡುತ್ತಿರುವ ಪೈರಸಿ ಕಾಟದ ವಿರುದ್ದವಾಗಿ ಹೋರಾಟ ಮಾಡೋಣ ಎಂದು ಹೇಳಿದ್ದಾರೆ. ಈ ಹೇಳಿಕೆ ದರ್ಶನ್ ವಿರುದ್ದವಾಗಿ ಮಾತನಾಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ.ಕೆಂದರೆ ಸುದೀಪ್ ಮತ್ತು ದರ್ಶನ್ ಇವರಿಬ್ಬರೂ ಸ್ನೇಹಿತರು. ಇನ್ನೂ ವಿಜಯಲಕ್ಷ್ಮಿ ನನಗೆ ತುಂಬಾ ವರ್ಷಗಳಿಂದ ಗೊತ್ತಿರುವವರು ತುಂಬಾ ಆಪ್ತರು, ಅವರು ಕೂಡಾ ಒಬ್ಬ ವ್ಯಕ್ತಿಯನ್ನು ಬೊಟ್ಟು ಮಾಡಿ ತೋರಿಸಿ ಮಾತನಾಡಿದ್ದಾರೆ ಎಂದು ಅನ್ನಿಸುವುದಿಲ್ಲ.ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿರಬೇಕು ಎಂದು ನಟಿ ರಕ್ಷಿತಾ ಸ್ಪಷ್ಟನೆಯನ್ನು ನೀಡಿದ್ದಾರೆ.
ನಾವೆಲ್ಲಾ ಒಟ್ಟಾಗಿದ್ದರೆ ಅದೇ ನಮ್ಮ ಬಲ.ಲ್ಲರೂ ಒಟ್ಟಾಗಿ ಪೈರಸಿ ವಿರುದ್ದ ಫೈಟ್ ಮಾಡೋಣ. ಹಿಂದೆ ನಡೆದ ಘಟನೆಗಳನ್ನೆಲ್ಲಾ ಮರೆತು ಮುಂಬರುವ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡೋಣ ಎಂದಿದ್ದಾರೆ.
