ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ನಿವಾಸದ ಬಳಿ ನಡೆದಿರುವ ಗಲಭೆ ವಿರುದ್ಧ ಬಿಜೆಪಿ 17 ನಾಯಕರು ಇದೇ ಜನವರಿ ತಿಂಗಳ 17ರಂದು ಬಳ್ಳಾರಿಯಿಂದ ಬೆಂಗಳೂರಿನವರೆಗೂ ಪಾದಯಾತ್ರೆಯನ್ನು ನಡೆಸುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ .ಬಿಜೆಪಿಯವರು ಮಾಡುತ್ತಿರುವುದು ಸರಿಯಲ್ಲವೆಂದು ಎಂದು ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.
ಈ ವಿಚಾರದ ಕುರಿತು ಮಾತನಾಡಿರುವ ಅವರು, ಬಿಜೆಪಿಯವರು ಪಾದಯಾತ್ರೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಇದು ಅಕ್ರಮ ಪಾದಯಾತ್ರೆ. ಜನಾರ್ಧನ ರೆಡ್ಡಿ ಸಚಿವರಾಗಿದ್ದಾಗ ದೊಡ್ಡ ದೊಡ್ಡ ದೇವಸ್ಥಾನವನ್ನು ದ್ವಂಸಮಾಡಿದ್ದರು.ಅವರ ಟೀಂಗಡಿಯನ್ನು ಕಿತ್ತುಹಾಕಿತ್ತು.ತಮ್ಮ ದೂರಾಸೆಯ ಬುದ್ದಿಯಿಂದಾಗಿ ಬಳ್ಳಾರಿಯನ್ನು ಆಳಿದ್ದರು.ಅವರ ವಿರುದ್ದ ನಾವು ಪಾದಯಾತ್ರೆಯನ್ನು ಮಾಡಿದ್ದೇವುಇದೀಗ ಬಿಜೆಪಿಯವರು ಬಳ್ಳಾರಿಯ ಗಲಭೆ ವಿಚಾರಕ್ಕೆ ಪಾದಯಾತ್ರೆ ಮಾಡಲು ಸಿದ್ದರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
