ಬೆಂಗಳೂರು: ಕೆಂಗೇರಿ ರಿಂಗ್ ರೋಡಿನಲ್ಲಿರುವ ನಟ ಡಾ.ವಿಷ್ಣುವರ್ಧನ್ ಸಮಾಧಿಯನ್ನ ನೆಲಸಮಗೊಳಿಸಲಾಗಿದ್ದು,ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೈಕೋರ್ಟ್ ಸೂಚನೆಯಂತೆ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿಯನ್ನು ನೆಲಸಮ ಮಾಡಿರುವ ಕಾರಣ ಸರ್ಕಾರ ಮತ್ತು ಪೊಲೀಸರ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮೈಸೂರಲ್ಲಿ ಡಾ.ವಿಷ್ಣುವಿನ ಸ್ಮಾರಕವನ್ನು ನಿರ್ಮಿಸುವ ಪರಿಣಾಮ ಬೆಂಗಳೂರಿನಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿರುವ ಸ್ಮಾರಕವನ್ನು ನೆಲಸಮ ಮಾಡಲಾಗಿದೆ.ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕವನ್ನು 2.75 ಎಕರೆಯಲ್ಲಿ ನಿರ್ಮಿಸಲಾಗಿದ್ದೆ ಆದ್ದರಿಂದ ರಿಂಗ್ ರೋಡಿನಲ್ಲಿರುವ ಸ್ಮಾರಕವನ್ನು ನೆಲಸಮ ಮಾಡಲಾಗಿದೆ ಎನ್ನಲಾಗಿದೆ.
