ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚು ಕಸದ ಸಮಸ್ಯೆ ಉಲ್ಬಣಿಸಿದೆ ಜನರು ಖಾಲಿ ಜಾಗ ಕಂಡಲೆಲ್ಲಾ ಕಸದ ರಾಶಿಯನ್ನು ಹಾಕುತ್ತಾರೆ. ಎಷ್ಟು ಸ್ವಚ್ಚವಾಗಿಟ್ಟುಕೊಳ್ಳಿ ಎಂದು ನಾಮಫಲಕಗಳನ್ನು ಹಾಕಿದರೂ ಎನು ಪ್ರಯೋಜನವಾಗಿಲ್ಲ. ಸದ್ಯಕಂತೂ ಕಸದ ಸಮಸ್ಯೆ ನಗರದಲ್ಲಿ ಬಗೆಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಎಸ್ಯುವಿ ಕಾರಿನಲ್ಲಿ ಮೂಟಗಟ್ಟಲೆರ ಕಸವನ್ನು ರಸ್ತೆಗೆ ಸುರಿದಿರುವ ಘಟನೆಯು ಬೆಂಗಳೂರಿನ ಸರ್ವಜ್ಞ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಸ್ತೆ ಬದಿಯಲ್ಲಿ ಕಸದ ರಾಶಿಯನ್ನು ಸುರಿದ ವ್ಯಕ್ತಿಯನ್ನು ಜಿಬಿವಿ ಅಧಿಕಾರಿಗಳು ಟ್ರಾಫಿಕ್ ಪೊಲೀಸ್ ಸಹಾಯದಿಂದ ಮತ್ತೆ ಮಾಡಿ ಆ ವ್ಯಕ್ತಿಗೆ ದಂಡವನ್ನು ವಿಧಿಸಿದ್ದಾರೆ ಎನ್ನಲಾಗಿದೆ.
