ಮೈಸೂರು: ನವೆಂಬರ್ 10 ದೆಹಲಿಯಲ್ಲಿ ಬಾರೀ ಸ್ಟೋಟ ಸಂಭವಿಸಿದೆ.ಇದು ಬಿಹಾರ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಲಿದೆ. ಬಿಜೆಪಿ ಪಕ್ಷದ ವಿರುದ್ದವಾಗಿ ಪರಿಣಾಮ ಬೀರಬಹುದು ಆದ್ದರಿಂದ ಕೇಂದ್ರ ಸರ್ಕಾರವೇ ಈ ಘಟನೆಯ ಕುರಿತು ತನಿಖೆಯನ್ನು ನಡೆಸಲಿ ಎಂದು ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
ದೆಹಲಿ ಸ್ಪೋಟ ಬಿಹಾರದ ಎಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಲೆಕ್ಷನ್ ಸಮಯದಲ್ಲಿ ಬಾಂಬ್ ಬ್ಲಾಸ್ಟ್ಗಳ ಬಗ್ಗೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕು.ಕೇಂದ್ರ ಸರ್ಕಾರವೇ ತನಿಖೆಯನ್ನು ನಡೆಸಿ ಉತ್ತರ ನೀಡಲಿ,ಬಾಂಬ್ ಬ್ಲಾಸ್ಟ್ಗಳಿಂದ ಹಲವಾರು ಅಮಾಯಕರ ಜೀವಗಳು ಹೋಗಿವೆ ಕೆಲವು ಜೀವಗಳಿಗೆ ಹಾನಿಯಾಗಿರುವುದ ತುಂಬಾ ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
