ಒಂದು ಮಟ್ಟದ ಮೂಢನಂಬಿಕೆ ಎಲ್ಲರಲ್ಲೂ ಇರುತ್ತದೆ. ಪ್ರತಿಯೊಬ್ಬರಿಗೂ ಸಹ ನಮಗೆ ಗೊತ್ತಿಲ್ಲದ ಹಾಗೆ ಎಷ್ಟೋ ಮೂಢನಂಬಿಕೆಗಳು ಇರುತ್ತದೆ. ಮನಸ್ಸಿನಲ್ಲಿ ಇರುವಂತ ಒಂದು ಭೀತಿಗೆ ಮೂಢನಂಬಿಕೆಯನ್ನು ಪಾಲನೆ ಮಾಡಲೇಬೇಕಾದ ಅನಿವಾರ್ಯ ಎದುರಾಗಿಬಿಡುತ್ತದೆ. ಯಾರು ತುಂಬಾ ಧೈರ್ಯವಾಗಿ ಇರ್ತಾರೆ ಅವರು ಖಂಡಿತವನ್ನು ಮೂಢನಂಬಿಕೆಯನ್ನು ವಿರೋಧ ಮಾಡಬಹುದು. ಪ್ರತಿಯೊಬ್ಬರಲ್ಲೂ ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆ ಇರಬಾರದು. ಬದುಕುವ ದಾರಿ ಸರಿಯಾಗಿದ್ದರೆ ಯಾವುದೇ ತೊಂದರೆ ಎದುರಾಗೋದಿಲ್ಲ. ಹೆದರುವಂಥ ಅವಶ್ಯಕತೆಯೂ ಇಲ್ಲ.

ನಾವೆಲ್ಲರೂ ಎಲ್ಲಾದರೂ ಹೋಗುವಂತ ಸಂದರ್ಭದಲ್ಲಿ, ಬೆಕ್ಕು ಅಥವಾ ಯಾರಾದ್ರೂ ವಿಧವೆ ಮಹಿಳೆ ಅಡ್ಡ ಬಂದ್ರು ಅಂದ್ರೆ ಏನಾಗುತ್ತೋ ಅಂತ ಹೆದ್ರುಕೊಂಡು ವಾಪಸ್ ಬರುವಂಥಹ ಜನರು ಸಹ ಇದ್ದಾರೆ. ನಮ್ಮ ಚಾಲನೆ ಸರಿಯಾಗಿದ್ದರೆ ಯಾವುದೇ ಅಪಾಯ ಎದುರಾಗುವುದಿಲ್ಲ. ಅ ರೀತಿ ಯಾರಾದ್ರೂ ಅಡ್ಡ ಬಂದ ತಕ್ಷಣ ನಮ್ಮಲ್ಲಿ ಒಂದು ಭೀತಿ ಪ್ರಾರಂಭ ಆಗುತ್ತೆ, ಮನಸಿನಲ್ಲಿ ಭಯ ಶುರುವಾಗುತ್ತೆ. ಅಯ್ಯೋ.. ಇವ್ರ್ ಎದುರಿಗೆ ಬಂದ್ಬಿಟ್ರಲ್ಲ, ಹೋಗೋ ಕೆಲಸ ಆಗುತ್ತೋ ಇಲ್ವೋ, ಅನ್ಕೊಂಡ್ ಹೋಗ್ತಾರೆ. ಆಗ ಯಾವುದೋ ಅನಾಚಾರ ಆಗಿಬಿಡುತ್ತೆ. ಆ ಭೀತಿಯೇ ತೊಂದರೆಗೆ ಕಾರಣ ಆಗ್ಬಿಡುತ್ತೆ. ಅದಕ್ಕೆ ನಾವು ಅಡ್ಡ ಬಂದವರೇ ಕಾರಣ ಅಂತ ಅವರ ಮೇಲೆ ಹಾಕ್ಬಿಟ್ಟು ಅಲ್ಲೊಂದು ಮೂಢನಂಬಿಕೆನೇ ಹುಟ್ಟಾಕ್ತೀವಿ. ನಾವು ಧೈರ್ಯದಿಂದ ಚಾಲನೆ ಮಾಡಿದರೆ ಯಾವುದೇ ರೀತಿ ಅಪಾಯ ಆಗೋದಿಲ್ಲ. ನಾವು ಯಾವಾಗ ಹೆದರಿಕೊಂಡು ಪ್ರಯಾಣ ಮಾಡ್ತೀವಿ, ಅದು ಖಂಡಿತ ಏನೋ ಒಂದು ತೊಂದ್ರೆ ಆಗೇ ಆಗುತ್ತೆ.
ಮತ್ತೊಂದು ನೋಡದಾದ್ರೆ ಇದು ಎಲ್ಲರಲ್ಲೂ ಸಾಮಾನ್ಯವಾಗಿರುತ್ತದೆ. ಮಂಗಳವಾರ ತಲೆ ಕೂದಲನ್ನು ಕತ್ತರಿಸಬಾರದು. ಒಂದು ವೇಳೆ ಅಮಾವಾಸ್ಯೆ ದಿನಗಳಲ್ಲಿ, ಮಂಗಳವಾರ ತಲೆ ಕೂದಲನ್ನು ಏನಾದರೂ ಕತ್ತರಿಸಬಾರದು ಎಂದು ಹಿರಿಯರು ಹೇಳುವರು. ಒಂದು ವೇಳೆ ಕತ್ತರಿಸಿಕೊಂಡರೆ ಅನಾಚಾರ ಆಗುವುದು ಎಂದು ಹೇಳುವರು. ಆದರೆ ಇಲ್ಲಿ ಯಾವುದೇ ಅನಾಚಾರ ಇದ್ರಲ್ಲಿ ಇಲ್ಲ. ಇದಕ್ಕೂ ಅಷ್ಟೇ ನಮ್ಮಲ್ಲಿ ಧೈರ್ಯವಿರಬೇಕಷ್ಟೆ. ಮಂಗಳವಾರ ತಲೆ ಕೂದಲನ್ನು ಕತ್ತರಿಸಬಾರದು ಎಂದು ಏಕೆ ಹೇಳಿದ್ದಾರೆ ಅಂದರೆ, ನಾನು ತಿಳಿದುಕೊಂಡಿರುವ ಪ್ರಕಾರ ಇದು ಕೂದಲು ಕತ್ತರಿಸುವವರೇ ಮಾಡಿರುವಂತಹ ಒಂದು ಪದ್ಧತಿ. ಭಾನುವಾರ ಸರ್ಕಾರಿ ರಜಾ ದಿನ ಅಂಗಡಿಯಲ್ಲಿ ತುಂಬಾ ಜನ ಬಂದು ಕ್ಷೌರಿಕರಿಗೆ ಆಯಾಸವಾಗಿರುತ್ತೆ. ಮತ್ತೆ ಸೋಮವಾರವೂ ಸಹ ಅವರಿಗೆ ಹೆಚ್ಚು ವ್ಯಾಪಾರವಾಗುವ ದಿನ. ಆದ್ದರಿಂದ ಭಾನುವಾರ ಮತ್ತೆ ಸೋಮವಾರ ಎರಡು ದಿನವೂ ಹೆಚ್ಚಾಗಿ ಕೆಲಸ ಮಾಡಿದ್ದರಿಂದ, ಮಂಗಳವಾರ ಅವರು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗಿರುವುದರಿಂದ ಈ ಪದ್ಧತಿಯನ್ನು ಮಾಡಿದ್ದಾರೆ. ಜನಕ್ಕೆ ಇದನ್ನ ಹೇಳಿದರೆ ಅರ್ಥವಾಗದ ಕಾರಣ ಇದರ ಹಿಂದೆ ಒಂದು ಭಯವನ್ನು ಒಂದು ಹುಟ್ಟಿಸಿ, ಅನ್ನೋದುಕ್ಕೋಸ್ಕರ ಇಲ್ಲೊಂದು ಮೂಢನಂಬಿಕೆ ಸೃಷ್ಟಿಸಿದ್ದಾರೆ.
ಹೇಮಂತ್ ಕೋಲಾರ ಬರೆದ ಈ ಲೇಖನವನ್ನೂ ಓದಿ: ಸಮಾನತೆ ಇಲ್ಲದ ಧರ್ಮ ಹೇಗೆ ಸನಾತನ ಧರ್ಮವಾಗುತ್ತದೆ?
ಬಾಗಿಲಿಗೆ ನಿಂಬೆಹಣ್ಣು ಕಟ್ಟುವಂಥದ್ದು, ಮನೆಯಲ್ಲಿ ಉಗುರು ಕಡಿಯದಿರುವಂತದ್ದು, ರಾತ್ರಿ ಸಮಯ ಬಟ್ಟೆ ಒಗೆಯದಿರುವಂಥದ್ದು, ಏನಾದ್ರೂ ಕೆಲವು ಪದಾರ್ಥಗಳನ್ನ ರಾತ್ರಿ ಸಮಯ ತೆಗೆದುಕೊಂಡು ಬೇರೆ ಕಡೆಗೆ ಹೋಗುವ ಸಂದರ್ಭದಲ್ಲಿ ಅವರು ಕಬ್ಬಿಣವನ್ನು, ಇದ್ದಿದ್ದನ್ನು ತೆಗೆದುಕೊಂಡು ಹೋಗುವುದು, ಈ ರೀತಿಯಾದ ನಾನಾ ರೀತಿಯ ಮೂಢನಂಬಿಕೆಗಳು ಬಳಕೆಯಲ್ಲಿವೆ. ಇವನ್ನೆಲ್ಲ ವಿರೋಧ ಮಾಡಿ ನಡೆದರೆ ಏನು ಆಗುವುದಿಲ್ಲ. ಆದರೆ ನಾವು ಏನೇ ಮಾಡಿದರೂ ಜಾಗ್ರತೆಯಿಂದ ಮಾಡಬೇಕಾಗುತ್ತೆ. ಕೆಲ ಮೂಢನಂಬಿಕೆಗಳನ್ನು ನಂಬಲೇಬೇಕಾಗುತ್ತದೆ. ಯಾಕಂದ್ರೆ ಅವುಗಳ ಹಿಂದೆ ವೈಜ್ಞಾನಿಕ ಕಾರಣ ಇದೆ. ಆದ್ರೆ ಜನಕ್ಕೆ ಅದು ತಿಳಿಯೋದಿಲ್ಲ. ಅದಕ್ಕೋಸ್ಕರನೇ ಹಿರಿಯರು ಈ ರೀತಿಯಾಗಿ ಭಯವನ್ನು ಹುಟ್ಟಿಸಿ ಮೂಢನಂಬಿಕೆಯನ್ನು ಸೃಷ್ಟಿ ಮಾಡಿದ್ದಾರೆ.

ಅವರು ಎಂಥ ಬಲಶಾಲಿಯಾಗಿದ್ರುನು ಕೆಲವೊಮ್ಮೆ ಮೂಢನಂಬಿಕೆಗೆ ಹೆದರಲೇಬೇಕಾಗುತ್ತದೆ. ಆದರೆ ಎಲ್ಲಾ ಸಮಯದಲ್ಲಿ ಮೂಢನಂಬಿಕೆಯನ್ನು ನಂಬುವುದು ತಪ್ಪು. ಯಾವುದೋ ಒಬ್ಬ ವ್ಯಕ್ತಿಗೆ ಯಾವುದು ರೋಗ ಬಂದಿರುತ್ತದೆ. ಅವರು ತುಂಬಾ ಆಸ್ಪತ್ರೆಗಳಲ್ಲಿ ಸುತ್ತಿ ಅದು ವಾಸಿಯಾಗದೆ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ಆಗ ಒಬ್ಬರು ಜಾತಕ ನೋಡುವವರು ಹೇಳುವರು “ಇದು ನಿಮ್ಮ ಮನೆಯಿಂದ ಆಗುತ್ತಿರುವ ತೊಂದರೆ, ನಿಮ್ಮ ಮನೆಗೆ ವಾಸ್ತು ಪ್ರಕಾರವಾಗಿಲ್ಲ” ಎಂದು ಹೇಳುವರು. ಅನಾರೋಗ್ಯಕ್ಕೂ, ಮನೆ ವಸ್ತುಗೂ ಏನ್ ಸಂಬಂಧ? ಇವರ ಮಾತನ್ನು ಕೇಳಿ ಮನೆಯಲ್ಲೇ ಬದಲಾಯಿಸಿರುವ ಘಟನೆಗಳು ಸಹ ಈ ಸಮಾಜದಲ್ಲಿ ನಡೆದಿವೆ. ಇಲ್ಲೊಂದು ಮೂಢನಂಬಿಕೆ. ಮರಕ್ಕೆ ಮುಡುಪು ಕಟ್ಟೋದ್ರಿಂದ ಮಕ್ಕಳಾಗುತ್ತಂತೆ. ಅದು ಹೇಗೆ ಸಾಧ್ಯ.. ಇದ್ಯಾವುದು ನಂಬಿಕೆ. ಈ ತರಹದ ಮೂಢನಂಬಿಕೆಗಳನ್ನು ಬಿಡಬೇಕಾಗುತ್ತದೆ. ಮೂಢನಂಬಿಕೆ ವಿರೋಧ ಮಾಡಬೇಕು ಅಂತ ಅಂದ್ರೆ ಧೈರ್ಯ ತುಂಬಾ ತುಂಬಾ ಮುಖ್ಯವಾಗುತ್ತೆ. ಎಲ್ಲೇ ಇರಲಿ ನಂಬಿಕೆ ಇರಲಿ, ಮೂಢನಂಬಿಕೆ ಬೇಡ.
- ಹೇಮಂತ್ ಕೋಲಾರ
ತೃತೀಯ ಬಿಎಸ್ಸಿ ವಿದ್ಯಾರ್ಥಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೊಡ್ಡಬಳ್ಳಾಪುರ.