ಬೆಂಗಳೂರು: “ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿ ದೊಡ್ಡ ಶಕ್ತಿ” ಎಂಬ ಪೋಸ್ಟೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಾಕುವುರ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರ? ಎನ್ನುವ ಪ್ರಶ್ನೆಗಳು ಮೂಡುತ್ತವೆ.
ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ “`Word Power Is World Power’ಎಂಬ ಪೋಸ್ಟನ್ನು ಹಾಕುವುದರ ಮೂಲಕ ತಮಗೆ ಈ ಹಿಂದೆ ನೀಡಿದ ಮಾತನ್ನು ತಪ್ಪಿದ್ದಾರೆ ಎಂದು ಬುದ್ದಿ ಮಾತು ಹೇಳುವ ರೀತಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ಈ ಪ್ರಪಂಚದಲ್ಲಿ ನ್ಯಾಯಾಧೀಶರಾಗಲೀ, ಅಧಿಕಾರಿಯೇ ಆಗಲಿ, ಅಧ್ಯಕ್ಷರೇ ಆಗಿರಲೀ, ನಾನಾಗಲಿ, ನೀವಾಗಲೀ, ಬೇರೆ ಯಾರೇ ಆಗಿದ್ದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ವಿಶ್ವದಲ್ಲಿ ದೊಡ್ಡ ಶಕ್ತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
