ಬೀದರ್:‌  ಬೈಕ್‌ ಮತ್ತು ಹಾಲಿನ ಗೂಡ್ಸ್‌ ವಾಹನ ನಡುವೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ತಾಯಿ ಮಗಳು ಸಾವನ್ನಪ್ಪಿರುವ ಘಟನೆಯು ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಮಾಪುರ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಸಾವನ್ನಪ್ಪಿರುವ ದುರ್ದೈವಿಗಳಾದ ಬೋಸ್ಲಾ ಗ್ರಾಮದ ತಕ್ಕಮ್ಮ ಕಿಶನ್‌ ಎಂಬುವವರು ಮತ್ತು ಸುರೇಖಾ ಗುಂಡಪ್ಪ ಎಂಬುವವರು ಮಹಾರಾಷ್ಟ್ರದಿಂದ ತಮ್ಮ ಊರಿಗೆ ವಾಪಸ್‌ ಬರುವಾಗ ಹಾಲಿನ ಗಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಪ್ರಕರಣವು ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ .

Leave a Reply

Your email address will not be published. Required fields are marked *