ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ನೆಚ್ಚಿನ ನಟ ಹೆಚ್ಚು ಬೇರೆಯವರು ತುಚ್ಚ ಎಂದು ಸ್ಟಾರ್ ವಾರ್ಗಳು ಅವತ್ತಿನಿಂದ ನಡೆದುಕೊಂಡು ಬರುತ್ತೀವೆ. ಅದೇ ರೀತಿ ಕಿಚ್ಚ ಸುದೀಪ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ಸ್ಟಾರ್ ವಾರ್ ಶುರುವಾಗಿದ್ದು, ಪರೋಕ್ಷವಾಗಿ ಟಕ್ಕರ್ ಕೊಡುತ್ತಿದ್ದಾರೆ.
ನಟ ಸುದೀಪ್ ತಮ್ಮ ಸಿನಿಮಾದ ಪ್ರಮೋಷನ್ ಮಾಡುವ ವೇಳೆ ಪರೋಕ್ಷವಾಗಿ ಯಾರನ್ನೂ ಗುರಿಯಾಗಿಸಿಕೊಂಡು ಹೇಳಿರುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.ನಟ ಸುದೀಪ್ ಹೇಳಿಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡಾ ಕೌಂಟರ್ ನೀಡಿದ ಬೆನ್ನಲ್ಲೇ ದರ್ಶನ್ ಆಪ್ತ ಧನ್ವೀರ್ ಕೂಡಾ ಟಕ್ಕರ್ ನೀಡಿದ್ದು, ದರ್ಶನ್ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸ್ಟಾರ್ ವಾರ್ ಪ್ರಾರಂಬಿಸಿದ್ದಾರೆ.
ʼಕಾಡಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ. ಆದ್ರೆ ಸಿಂಗನೇ ರಾಜʼ ಎಂದು ಹೇಳುವ ಮೂಲಕ ಪರೋಕ್ಷವಾಗಿಯೇ ನಟ ಧನ್ವೀರ್ ಕೌಂಟರ್ ಕೊಡ್ಡಿದ್ದಾರೆ.
